ಗ್ರಾಮದ ಹೊರವಲಯದ ಅರಣ್ಯದಲ್ಲಿ ಚಿರತೆ ಬಲೆಗೆ ಸಿಕ್ಕಿಕೊಂಡ ಸುದ್ದಿ ಬೆಳಿಗ್ಗೆ 7ಗಂಟೆಗೆ ಗ್ರಾಮಸ್ಥರಿಗೆ ತಿಳಿಯಿತು. ಮಾಗೋಡು ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಸುರಿವ ಮಳೆಯನ್ನೂ ಲೆಕ್ಕಿಸದೆ ಚಿರತೆ ನೋಡಲು ಜಮಾಯಿಸಿದ್ದರು. ಜನರ ಗುಂಪು ಹಾಗೂ ಚೀರಾಟ ಕಂಡು ಬೆದರಿದ ಚಿರತೆ ಉರುಳಿನಿಂದ ಹೊರ ಬರಲು ತೀವ್ರ ಪ್ರಯತ್ನ ನಡೆಸಿತು. ಹೊರ ಬರಲು ಸಾಧ್ಯವಾಗದೆ ನೋವಿನಿಂದ ನಿತ್ರಾಣಗೊಂಡು ಸುಸ್ತಾಯಿತು.