ಹೈದರಾಬಾದ್ (ಪಿಟಿಐ): ಸ್ವಾತಂತ್ರ್ಯ ಹೋರಾಟಗಾರ ಹಾಗೂ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಬಿ. ಸತ್ಯನಾರಾಯಣ ರೆಡ್ಡಿ ಶನಿವಾರ ಮುಂಜಾನೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ನುರಿತ ರಾಜಕಾರಣಿ ಸತ್ಯನಾರಾಯಣ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆಂಧ್ರಪ್ರದೇಶದ ಮೆಹಬೂಬ್ನಗರ ಜಿಲ್ಲೆಯ ಶಾದ್ನಗರದಿಂದ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ರೆಡ್ಡಿ ಭಾಗವಹಿಸಿ ಬಂಧನಕೊಳ್ಳಗಾಗಿದ್ದರು.
ರೆಡ್ಡಿ 1978ರಲ್ಲಿ ಜನತಾಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು ಮತ್ತು ಎರಡನೇ ಅವಧಿಗೆ ತೆಲುಗು ದೇಶಂ ಪಕ್ಷದಿಂದ 1984ರಲ್ಲಿ ಆಯ್ಕೆಯಾದರು.
1990ರಿಂದ 1993ರವರೆಗೆ ಉತ್ತರಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ರೆಡ್ಡಿ, ನಂತರ ಅದೇ ಹುದ್ದೆಯಲ್ಲಿ 1993ರಿಂದ 1995ರವರೆಗೆ ಒಡಿಶಾದಲ್ಲಿ ಕಾರ್ಯನಿರ್ವಹಿಸಿದರು.
ಕೆಲ ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲೂ ಉಸ್ತುವಾರಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.