ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ನಮ್ಮ ಭಾಷೆಗೆ ಆಗಾಗ ಸಂಕಷ್ಟಗಳು ಬಂದು ಒದಗುತ್ತಿರುವುದು ವಿಪರ್ಯಾಸದ ಸಂಗತಿ, ಕನ್ನಡದ ಉಳಿವಿಗೆ ಎಲ್ಲ ತಂತ್ರಜ್ಞಾನ ವ್ಯವಸ್ಥೆ ಕನ್ನಡದಲ್ಲಿ ಲಭ್ಯವಾಗುವಂತಾಗಬೇಕು. ನಮ್ಮ ಭಾಷೆ ನಮ್ಮ ಬದುಕಿನ ಪ್ರಶ್ನೆಯಾಗಬೇಕು. ಇಂಗ್ಲಿಷ್ ಉದರದ ಭಾಷೆಯಾದರೆ, ಕನ್ನಡ ಹೃದಯದ ಭಾಷೆಯಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿದ್ದ ಪ್ರೊ.ಎಸ್.ಎಂ. ಕಾಚಾಪುರ ಮಾತನಾಡಿದರು. ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್. ವಾಸರೆ ಉಪಸ್ಥಿತರಿದ್ದರು. ಬಂಗೂರುನಗರ ಪ.ಪೂ. ಕಾಲೇಜು ಪ್ರಾಚಾರ್ಯ ಯು.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಆರ್.ಜಿ. ಹೆಗಡೆ ವಹಿಸಿದ್ದರು. ಮಿಲನ ಭಾಗ್ವತ್, ದೀಕ್ಷಾ ಭಂಡಾರಿ, ಐಶ್ವರ್ಯ ಪುರಾಣಿಕ, ಸದಾಶಿವ ಗೋಡಖಿಂಡಿ ಗೀತಗಾಯನ ಮಾಡಿದರು. ಉಪಪ್ರಾಚಾರ್ಯ ಜಿ.ವಿ. ಭಟ್ ಸ್ವಾಗತಿಸಿದರು. ಉಪನ್ಯಾಸಕ ನೇಮಿನಾಥಗೌಡ ನಿರೂಪಿಸಿದರು. ಉಪನ್ಯಾಸಕ ಎನ್.ವಿ. ಪಾಟೀಲ ವಂದಿಸಿದರು.