ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದನಭಾವಿ ಕೆರೆ ಅಭಿವೃದ್ಧಿಗೆ ಚಾಲನೆ

Last Updated 9 ಜೂನ್ 2011, 10:15 IST
ಅಕ್ಷರ ಗಾತ್ರ

ಧಾರವಾಡ: “ಕೆರೆಗಳ ಅಭಿವೃದ್ಧಿಗಾಗಿ ಧಾರವಾಡ ವಿಧಾನಸಭಾ ಮತಕ್ಷೇತ್ರಕ್ಕೆ 4.20 ಕೋಟಿ ರೂಪಾಯಿ ಅನುದಾನ ಉಪಯೋಗಿಸಲಾಗುತ್ತಿದೆ” ಎಂದು ಶಾಸಕಿ ಸೀಮಾ ಮಸೂತಿ ತಿಳಿಸಿದರು.

ತಾಲ್ಲೂಕಿನ ಮಾದನಭಾವಿಯಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಲವಾರು ಗ್ರಾಮಗಳು ಕೆರೆಯಾಧಾರಿತ ನೀರನ್ನು ಅವಲಂಬಿಸಿವೆ. ಅನೇಕ ಕಡೆ ಕೆರೆ ನೀರನ್ನು ದನಕರು ಗಳಿಗೆ, ಮೇಕೆಗಳಿಗೆ ಕುಡಿಯಲು ಬಳಸುತ್ತಿದ್ದು, ಅವು ಗಳ ಶುದ್ಧೀಕರಣ ಅಗತ್ಯ ಎಂದು ಅವರು ಹೇಳಿದರು.

ತಮ್ಮ ಕ್ಷೇತ್ರದಲ್ಲಿ 18 ಕೆರೆಗಳಿಗೆ ಮರುಜೀವ ನೀಡಲಾಗುವುದು ಎಂದು ಶಾಸಕರು ತಿಳಿಸಿದರು. ಅಶೋಕ ಮಸೂತಿ, ಮಡಿವಾಳಪ್ಪ ಉಳವಣ್ಣವರ, ಬಸವರಾಜ ಬ್ಯಾಳಿ, ಬಸವರಾಜ ದೊಡವಾಡ, ಶಿವಾನಂದ ಹೊಳೆಹಡಗಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT