ಗುಡಗಾಂವ್(ಪಿಟಿಐ): `ಮಾರುತಿ ಸುಜುಕಿ ಇಂಡಿಯ~ ಮಾನೆಸರ ಘಟಕದಕಾರ್ಮಿಕ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ ಆರು ಕಾರ್ಮಿಕರನ್ನು ಬಂಧಿಸಿದ್ದು, ಈವರೆಗೆ ಒಟ್ಟು 97 ಮಂದಿ ಬಂಧನಕ್ಕೊಳಗಾಂದಂತೆ ಆಗಿದೆ.
ಬುಧವಾರ ಕಾರ್ಮಿಕರು ನಡೆಸಿದ ಗಲಭೆಯಲ್ಲಿ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಅವನೀಶ್ ದೇವ್ ಹತರಾಗಿದ್ದರೆ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.