ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗ ಬದಲಿಸಿದ ರೈಲು

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೇಕ ರಾಜ್ಯ ನಿರ್ಮಾಣದ ವಿರುದ್ಧ ಧರ್ಮಾವರಂ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಕಡೆಗೆ ಹೊರಟಿದ್ದ ಹಲವು ರೈಲುಗಳ ಸಂಚಾರ ಗುರುವಾರವೂ ಅಸ್ತವ್ಯಸ್ತಗೊಂಡಿತು.

ಕುರ್ಲಾ-ಕೊಯಿಮತ್ತೂರು ಎಕ್ಸ್‌ಪ್ರೆಸ್ ಗುಂತಕಲ್‌ನಿಂದ ಮಾರ್ಗ ಬದಲಿಸಿ ಬಳ್ಳಾರಿ, ಚಿಕ್ಕಜಾಜೂರು, ಬೆಂಗಳೂರು ಮೂಲಕ ಕೊಯಮತ್ತೂರಿಗೆ ತೆರಳಿತು. ಯಶವಂತಪುರ- ಗೋರಖ್‌ಪುರ ಎಕ್ಸ್‌ಪ್ರೆಸ್ ಪೆನಕೊಂದಿಂದ ಮಾರ್ಗ ಬದಲಾಯಿಸಿ ತುಮಕೂರು, ಅರಸಿಕೆರೆ, ಚಿಕ್ಕಜಾಜೂರು ಮತ್ತು ಬಳ್ಳಾರಿ ಮಾರ್ಗವಾಗಿ ಸಂಚರಿಸಿತು.

ಬೆಳಿಗ್ಗೆ 8ಕ್ಕೆ ಹೊರಡಬೇಕಿದ್ದ ಯಶವಂತಪುರ-ವಿಜಯವಾಡಾ ಪ್ಯಾಸೆಂಜರ್ 10.30ಕ್ಕೆ ಹೊರಟಿತು. ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಮ್‌ವರೆಗೆ ಮಾತ್ರ ಸಂಚರಿಸಿ, ವಾಪಸು ಯಶವಂತಪುರಕ್ಕೆ ಆಗಮಿಸಿತು. ಮೈಸೂರು-ಜೈಪುರ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಮಾರ್ಗ ಬದಲಾವಣೆ ಮಾಡಿ ತುಮಕೂರು, ಅರಸಿಕೆರೆ, ಚಿಕ್ಕಜಾಜೂರು, ಬಳ್ಳಾರಿ ಮತ್ತು ಗುಂತಕಲ್ ಮೂಲಕ ಪ್ರಯಾಣ ಬೆಳೆಸಿತು.

ಬೆಂಗಳೂರು-ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್ ಸಹ ತನ್ನ ನಿತ್ಯದ ಮಾರ್ಗದ ಬದಲು ಕೃಷ್ಣರಾಜಪುರ, ಬಂಗಾರಪೇಟೆ, ಕಟಪಾಡಿ ಮತ್ತು ರೇಣಿಗುಂಟಾ ಮೂಲಕ ಸಂಚರಿಸಿತು. ಯಶವಂತಪುರ-ಕಾಚಿಗುಡ ಎಕ್ಸ್‌ಪ್ರೆಸ್ ಕೂಡ ತುಮಕೂರು, ಅರಸಿಕೆರೆ, ಬಳ್ಳಾರಿ ಮಾರ್ಗದ ಮೂಲಕ ಪ್ರಯಾಣ ಬೆಳೆಸಿತು.
ವಿಜಯವಾಡ-ಯಶವಂತಪುರ ಪ್ಯಾಸೆಂಜರ್ ಅನಂತಪುರದವರೆಗೆ ಮಾತ್ರ ಸಂಚರಿಸಿತು.

ಗುಂತಕಲ್-ಹಿಂದಪುರ, ಹಿಂದಪುರ-ಗುಂತಕಲ್, ಗುಂತಕಲ್-ತಿರುಪತಿ, ತಿರುಪತಿ-ಗುಂತಕಲ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು.
ಶುಕ್ರವಾರ ಸಹ ಗುಂತಕಲ್-ಹಿಂದಪುರ ಪ್ಯಾಸೆಂಜರ್ ಸಂಚಾರವನ್ನು ರದ್ದುಗೊಳಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಉಳಿದ ರೈಲುಗಳ ಸಂಚಾರದ ಬಗೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT