ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನ ಮಂಜೂರಾತಿಗೆ ಒತ್ತಾಯಿಸಿ ಮನವಿ

Last Updated 13 ಫೆಬ್ರುವರಿ 2013, 6:50 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕಿನ ಗೋನವಾಟ್ಲತಾಂಡಾದ ಮುಗ್ಧ ಜನತೆಗೆ ಈ ಹಿಂದಿನಿಂದ ಸರ್ಕಾರಗಳು ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ಮಾಸಾಶನ ಸೇರಿದಂತೆ ವಿವಿಧ ಯೋಜನೆಗಳಡಿ ನೀಡುತ್ತಿದ್ದ ಮಾಸಾಶನಗಳನ್ನು ಸ್ಥಗಿತಗೊಳಿಸಿ ತಾಲ್ಲೂಕು ಆಡಳಿತ ವಂಚಿಸಿದೆ.

ಕೂಡಲೆ ಈ ಮುಂಚೆ ನೀಡುತ್ತಿದ್ದ ಎಲ್ಲಾ ಮಾಶಾಸನಗಳನ್ನು ಪುನರ್ ಪರಿಶೀಲಿಸಿ ಮಂಜೂರ ಮಾಡುವಂತೆ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಸಮಾಜ ಬಾಂಧವರು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.

ಸೋಮವಾರ ತಹಸೀಲ್ದಾರ ರಾಮಣ್ಣ ಹೊಸಮನಿ ಅವರಿಗೆ ಮನವಿ ಅರ್ಪಿಸಿದ ಸಮಾಜ ಬಾಂಧವರು, ಬಂಜಾರರು ಕೂಲಿ ಮಾಡಿಕೊಂಡು ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಬಹುತೇಕ ಲಂಬಾಣಿಗ ಫಲಾನುಭವಿಗಳ ಮಾಸಾಶನ ತಡೆದು ಒಪ್ಪತ್ತಿನ ಊಟಕ್ಕೆ ಪರದಾಡುವಂತೆ ಮಾಡಲಾಗಿದೆ.

ಕಾನೂನಾತ್ಮಕ ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಪಡಿಸಿದರು.

ಹುಲ್ಲಪ್ಪ ರಾಠೋಡ, ನೀಲೇಶ ಪವಾರ್, ಮಾನಪ್ಪ ಚವ್ಹಾಣ, ಲಕ್ಷ್ಮಣ, ಗೋಪಿಚಂದ, ಶಿವಾಜಿ, ಕುಬೇರ, ಶಿವಪ್ಪ, ರಾಮಚಂದ್ರ, ನೀಲಪ್ಪ, ಡಾಕಪ್ಪ, ಸಗರಪ್ಪ, ತಾರಾಸಿಂಗ್, ಜುಮ್ಮಾಬಾಯಿ, ಕೇಶುಬಾಯಿ, ಶಾಂತಾಬಾಯಿ, ಭೀಮಾಬಾಯಿ, ಕಮ್ಮಿಬಾಯಿ, ಪೀರಿಬಾಯಿ, ಸಗರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT