ಮಾಹಿತಿ ಪಡೆಯುವುದರಿಂದ ಏನೆಲ್ಲಾ ಸಾಧಿಸಬಹುದು. ಇದು ಭ್ರಷ್ಟಾಚಾರ ವಿರುದ್ಧಕ್ಕೆ ಬ್ರಹ್ಮಾಸ್ತ್ರ ಎಂಬ ಮಹತ್ತರ ಸಂದೇಶವನ್ನು `ಭಾಸ್ಕರನ್~ ಪ್ರಕರಣ ನೀಡುತ್ತಿದೆ. ಈ ಹಕ್ಕನ್ನು ಚಲಾಯಿಸಲು ಸಾರ್ವಜನಿಕರು ಮುಂದಾದರೆ ರಾಜಕಾರಣಿಗಳು ಮಾತ್ರವಲ್ಲ ಎಲ್ಲ ವರ್ಗದ ಅಧಿಕಾರಿಗಳು ತಲ್ಲಣಗೊಳ್ಳುತ್ತಾರೆ.
ಇದೇ ನಿಯಮದ ಅಡಿಯಲ್ಲಿ ಸಾರ್ವಜನಿಕರು ಅಧಿಕಾರಿಗಳ ರಾಜಕಾರಣಿಗಳ ಆಸ್ತಿ ವಿವರ ಪಡೆಯಲು ಸಾಧ್ಯವಾಗುತ್ತದೇನೋ? ಈ ಹಕ್ಕು ಇರುವುದಾದರೆ ಭ್ರಷ್ಟಾಚಾರ ನಿಗ್ರಹಕ್ಕೆ ಇದೊಂದನ್ನೇ ಅಸ್ತ್ರವಾಗಿ ಉಪಯೋಗಿಸಬಹುದು. ಆ ಪ್ರಕರಣಗಳನ್ನು ಕೋರ್ಟು ಪ್ರತ್ಯೇಕ ಭಾಗ ಮಾಡಿ ಶೀಘ್ರ ತೀರ್ಪು ನೀಡಿದರೆ `ಭ್ರಷ್ಟ ಮುಕ್ತ ರಾಷ್ಟ್ರ~ ನನಸಾಗುವುದರಲ್ಲಿ ಸಂಶಯವಿಲ್ಲ.