ನಿರ್ಮಾಪಕ ಅತುಲ್ ಕುಲಕರ್ಣಿ ನಿರ್ಮಾಣದ `ನೆರಳು~ ವಿನೋದ್ ಕೆ. ನಿರ್ದೇಶನದಲ್ಲಿ ಸಿದ್ಧವಾಗಿದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಒಂದು ಹಾಡು ಬಾಕಿ ಇದೆ. ಸಂಕಲನ, ಡಬ್ಬಿಂಗ್ ಕೆಲಸ ಕೂಡ ಪೂರ್ಣಗೊಂಡಿದೆ.
ಬಾಕಿ ಇರುವ ಹಾಡನ್ನು ಸಕಲೇಶಪುರ ಹಾಗೂ ಮೈಸೂರಿನಲ್ಲಿ ಚಿತ್ರೀಕರಿಸಲು ತಂಡ ತಯಾರಾಗಿದೆ. ಸಂಜೀವ್, ಆಕಾಶ್, ಶಶಿಕುಮಾರ್, ಅವಿನಾಶ್ ಹಾಗೂ ಸುಧಾ ಬೆಳವಾಡಿ, ಹೊನ್ನವಳ್ಳಿ ಕೃಷ್ಣ, ಶಂಕರ್ ಅಶ್ವತ್ಥ್ ನಟಿಸಿದ್ದಾರೆ. ಶಿವರಾಜ್ ಮೇಹು ಸಂಕಲನ, ಶಂಕರ್ ಛಾಯಾಗ್ರಹಣ, ಶ್ರಿ ಹರ್ಷ ಸಂಗೀತ ಈ ಚಿತ್ರಕ್ಕಿದೆ.