ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್, ಮುಂದಿನ ನಡೆ ಏನು ಎನ್ನುವುದನ್ನು ಪ್ರಿಯಾಂಕಾ ಅವರೇ ನಿರ್ಧರಿಸುತ್ತಾರೆ ಎಂದು ಬುಧವಾರ ಸ್ಪಷ್ಟಪಡಿಸಿದೆ.
‘ಪ್ರಿಯಾಂಕಾ, ತಮ್ಮ ಸಹೋದರ ರಾಹುಲ್ ನಿವಾಸಕ್ಕೆ ಬಂದಾಗ ಅಲ್ಲಿ ಪಕ್ಷದ ಪ್ರಮುಖರ ಸಭೆ ನಡೆಯುತ್ತಿತ್ತು. ಔಪಚಾರಿಕವಾಗಿ ಅವರು ಮುಖಂಡರ ಜತೆ ಮಾತನಾಡಿದರು. ಇದಕ್ಕೆ ಬೇರೆ ಅರ್ಥ ಬೇಡ’ ಎಂದು ಪಕ್ಷದ ವಕ್ತಾರ ರಣದೀಪ್ ಸರ್ಜೆವಾಲಾ ಹೇಳಿದ್ದಾರೆ.