ಚುನಾವಣಾ ಅಧಿಸೂಚನೆ ಪ್ರಕಟಗೊಂಡ ಮೂರೇ ದಿನಗಳಲ್ಲಿ ಹೊನ್ನಾಳಿ ಪೊಲೀಸರು 12 ಪ್ರಕರಣ ದಾಖಲಿಸಿದ್ದಾರೆ. ನಿಷ್ಪಕ್ಷಪಾತ ಕರ್ತವ್ಯ ನಿರ್ವಹಣೆಗೆ ಇದೊಂದು ಮಾದರಿ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕೆಲಸ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕು ಚುನಾವಣಾಧಿಕಾರಿ ಬಿ. ಆನಂದ್ ಮಾತನಾಡಿ, ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿಯನ್ನು ರೂ. 16 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವ್ಯಕ್ತಿಯ ಚುನಾವಣಾ ವೆಚ್ಚ ರೂ. 16ಲಕ್ಷ ಮೀರಿದ್ದು ಕಂಡುಬಂದರೆ, ಅಂತಹ ವ್ಯಕ್ತಿಯನ್ನು ಅನರ್ಹಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಆದ್ದರಿಂದ, ಎಲ್ಲಾ ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಕುಮಾರ್, ಹನುಮಂತಪ್ಪ, ಅಶೋಕ್ಕುಮಾರ್, ತ್ಯಾಗರಾಜ್ ಅವರು ಚುನಾವಣಾ ವೆಚ್ಚ ಮೇಲುಸ್ತುವಾರಿ ಅಧಿಕಾರಿ ಎ.ಕೆ. ಧೀರ್ ಅವರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.
ಸಹಾಯಕ ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್, ನ್ಯಾಮತಿ ಚುನಾವಣಾಧಿಕಾರಿ ಹನುಮಂತರೆಡ್ಡಿ, ಸಿಪಿಐ ಚನ್ನಕೇಶವ ಬಿ. ಟಿಂಕಳೀಕರ್, ಪಿಎಸ್ಐ ಬಿ.ಜಿ. ಕುಮಾರಸ್ವಾಮಿ, ಅಬಕಾರಿ ಸಿಪಿಐ ಎಸ್.ಆರ್. ಮುರುಡೇಶ್, ರಾಜು ಇದ್ದರು.