ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನಾವು ಕನ್ನಡಿಗರು ಬೆಟ್ಟದಷ್ಟು ಭರವಸೆ ಇಟ್ಟಿದ್ದೇವೆ!
ಅವರ ಆಡಳಿತದ ಆರಂಭ ಅರಸು, ವೀರೇಂದ್ರ ಪಾಟೀಲ, ಹೆಗಡೆ, ದೇವೇಗೌಡರ ಆಡಳಿತದ ನೆನಪನ್ನು ತಂದುಕೊಟ್ಟಿತ್ತು! ದಯಮಾಡಿ ಮುಖ್ಯಮಂತ್ರಿ ಅವರು ನಿರಾಶೆ ಗೊಳಿಸುವುದು ಬೇಡ.
ಆಡಳಿತ ಹಳಿ ತಪ್ಪುತ್ತಿರುವ ಲಕ್ಷಣ ಕಾಣುತ್ತಿದೆ. ರಾಜಿ ರಾಜಕಾರಣ ಬೇಡ. ಸಂಪುಟದಿಂದ ಡಿ.ಕೆ.ಶಿವಕುಮಾರ್ರನ್ನು ಹೊರಗಿಟ್ಟು ‘ಸಿದ್ದರಾಮಯ್ಯ ಅವರಿಗೆ ಸಿದ್ದರಾಮಯ್ಯ ಅವರೇ ಸಾಟಿ’ ಎಂಬಂತೆ ದಕ್ಷತೆ ಮೆರೆಯಲಿ.