ದೇವರ ಹೆಸರಿನಲ್ಲಿ ನಡೆಯುವ ಯಾವುದೇ ಆಚರಣೆಗಳು ಮಾರಕ ಹಾಗೂ ಕಂಟಕವಾಗುವಂತಿರಬಾರದು. ಮಡೆ ಮಡೆ ಸ್ನಾನ ಆಚರಣೆಯಲ್ಲಿ ಯಾವುದೇ ಜಾತಿ ಜನಾಂಗ ಎನ್ನುವುದು ಮುಖ್ಯವಲ್ಲ . ಯಾರೇ ಉಂಡ ಎಂಜಲೆಲೆ ಮೇಲೆ ಉರುಳಾಡುವುದು ಮಾರಕ ರೋಗಗಳಿಗೂ ಕಾರಣವಾಗಬಹುದು.
ವಿದ್ಯೆ-ಬುದ್ಧಿ ಇರುವ ಮಾನವ ಕುಲ ಶುಚಿಯಾಗಿರುವುದನ್ನು ರೂಢಿಸಿಕೊಂಡರೆ, ಅದರ ಬಗ್ಗೆ ತಿಳಿವಳಿಕೆ ಮೂಡಿಸಿಕೊಂಡು, ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ದೇವರಿಗೆ ನೈವೇದ್ಯ ಮಾಡಿದ ಅನ್ನ ಭಕ್ತಿಯಿಂದ ಸ್ವೀಕರಿಸುವ ಪ್ರಸಾದವಾಗಬೇಕೆ ವಿನಾ ಕೈ-ಕಾಲುಗಳಲ್ಲಿ ತುಳಿಯುವ ಕಸವಾಗಬಾರದು. ಹಾಗಾಗಿ ನೈವೇದ್ಯದ ಮಡೆಸ್ನಾನ ಕೂಡ ಅನ್ನಕ್ಕೆ ಮಾಡುವ ಅಪಚಾರವಾಗುತ್ತದೆ.