ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಸಿಖ್ ಗಣ್ಯರಿಗೆ ಪ್ರಶಸ್ತಿ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಹಿರಿಯ ಭಾರತೀಯ ರಾಯಭಾರಿ ಮತ್ತು ಲೇಖಕರಾದ ನವ್‌ತೇಜ್ ಸರ್ನಾ ಸೇರಿದಂತೆ ಮೂವರು ಗಣ್ಯ ಸಿಖ್ಖರಿಗೆ ಸಿಖ್ ಪಾರಂಪರೆ ಪ್ರಶಸ್ತಿಯನ್ನು `ಸಿಖ್ ಉನ್ನತ್ತೀಕರಣಕ್ಕಾಗಿ~ ನೀಡಲಾಗಿದೆ.

ಸಿಖ್ ಕಲೆ ಮತ್ತು ಚಿತ್ರ ಪ್ರತಿಷ್ಠಾನ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸರ್ನಾ ಅವರು ಪ್ರಶಸ್ತಿಯನ್ನು ಪಡೆದರು.

ಪ್ರಸ್ತುತ ಇಸ್ರೇಲ್‌ನ ಭಾರತೀಯ ರಾಯಭಾರಿಯಾದ ಸರ್ನಾ ಎರಡು ಕಾದಂಬರಿಗಳನ್ನು `ದ ಎಕ್ಸೈಲ್~ (2008) ಮತ್ತು `ವಿ ವರ್‌ನಾಟ್ ಲವರ್ಸ್‌ ಲೈಕ್ ದಟ್~ (2003) ಬರೆದಿದ್ದಾರೆ. ಈ ಎರಡು ಪುಸ್ತಕಗಳನ್ನು ಹಿಂದಿಗೆ ಭಾಷಾಂತರಿಸಲಾಗಿದೆ. `ವಿ ವರಂಟ್ ಲವರ್ಸ್‌ ಲೈಕ್ ದಟ್~ ಕಾದಂಬರಿಯನ್ನು ಅರೇಬಿಕ್‌ಗೂ ಸಹ ಭಾಷಾಂತರಿಸಲಾಗಿದೆ.

ಸರ್ನಾ ಅವರನ್ನು ಹೊರತುಪಡಿಸಿ ಹೆರಿಟೇಜ್ ಪ್ರಶಸ್ತಿಯನ್ನು ಸ್ಟಾಂಡರ್ಡ್ ಚಾರ್ಟರ್ಡ್‌ನ ಏಷ್ಯದ ಸಿಇಒ ಜಸ್ಪಾಲ್ ಬಿಂರ್ದಾ ಅವರಿಗೆ (ಮುಖಂಡತ್ವಕ್ಕೆ) ಮತ್ತು ಚಿತ್ರ ನಿರ್ಮಾಪಕ ಗುರಿಂದರ್ ಚದ್ದಾ (`ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಂ)ಕಲೆಗೆ ನೀಡಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT