ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಲಾ ಕುಟುಂಬಕ್ಕೆ `ಅಂತ್ಯೋದಯ' ಕಾರ್ಡ್

ಪ್ರಜಾವಾಣಿ ಫಲಶ್ರುತಿ
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಕುಟುಂಬಕ್ಕೆ ನೀಡಿದ್ದ ಎಪಿಎಲ್ ಕಾರ್ಡ್‌ನ್ನು ಹಿಂಪಡೆದುಕೊಂಡು ಸರ್ಕಾರ ಕೊನೆಗೂ ಅಂತ್ಯೋದಯ ಕಾರ್ಡ್ ಒದಗಿಸಿದೆ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತಾಯಿ ಮುರುಗಮ್ಮ, `ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿ ಅಂತ್ಯೋದಯ ಕಾರ್ಡ್‌ನ್ನು ನೀಡಿದ್ದಾರೆ' ಎಂದು ತಿಳಿಸಿದರು.

`ಮೃತಪಟ್ಟ ಮಗಳು ಹಿಂತಿರುಗಿ ಬರುವುದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇನ್ನಾದರೂ ಸಮರ್ಪಕ ಶುಶ್ರೂಷೆ ದೊರೆಯಬೇಕು. ನನ್ನ ಮಗಳಿಗೆ ಬಂದ ಸ್ಥಿತಿ ಯಾವ ಮಕ್ಕಳಿಗೂ ಬರಬಾರದು. ಇದೇ ನನ್ನ ಕಳಕಳಿ' ಎಂದು ನಿಟ್ಟುಸಿರು ಬಿಟ್ಟರು.

`ಇಷ್ಟು ದಿನ ಮೇಘಲಾಳ ಆರೈಕೆಯಲ್ಲಿ ತೊಡಗಿದ್ದ ಸಹೋದರಿ ರೂತ್‌ಳನ್ನು ಇನ್ನು ಮುಂದೆಯಾದರೂ ಶಾಲೆಗೆ ಕಳುಹಿಸುವ ಆಸೆಯಿದೆ. ಸರ್ಕಾರ ವಿಧವಾ ಪಿಂಚಣಿಯನ್ನು ಒದಗಿಸುವ ಸೌಜನ್ಯ ತೋರಿಸಿದರೆ ಈ ಬಡಜೀವಗಳು ಬದುಕಿಕೊಳ್ಳುತ್ತವೆ' ಎಂದು ಮನವಿ ಮಾಡಿದರು.

ರಾಜಧಾನಿಯ ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳಿಗೆ ಸಿಗದ ಶುಶ್ರೂಷೆ, ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಹಾಗೂ ಕಡುಬಡತನವಿದ್ದರೂ ಆಕೆಯ ಕುಟುಂಬಕ್ಕೆ ಎಪಿಎಲ್ ಒದಗಿಸಿರುವ ಬಗ್ಗೆ `ಪ್ರಜಾವಾಣಿ' ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT