ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮೇವಿಗೆ ತೀವ್ರ ಅಭಾವ ಉಂಟಾಗಿದೆ. ಸರ್ಕಾರ ಅಲ್ಲಲ್ಲಿ ಗೋಶಾಲೆಗಳನ್ನು ತೆರೆದಿದ್ದರೂ ಜಾನುವಾರುಗಳ ರಕ್ಷಣೆ, ನೀರು, ನಿರ್ವಹಣೆಯ ಸೌಲಭ್ಯಗಳಿಲ್ಲ.
ಕೆಲವು ದೊಡ್ಡ ರೈತರ ಬಳಿ ಮೇವಿದೆ. ಆದರೆ ಅವರು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬಡ ರೈತರಿಗೆ ಅದನ್ನು ಕೊಳ್ಳುವ ಶಕ್ತಿ ಇಲ್ಲ. ಈಗ ಸರ್ಕಾರ ಮೇವನ್ನು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು. ಮೇವು ಬ್ಯಾಂಕ್ ಸ್ಥಾಪಿಸಿದರೂ ರೈತರಿಗೆ ಅನುಕೂಲವಾಗಲಿದೆ.