ರಾಜ್ಯದ ಬಹಳಷ್ಟು ರೈತರು ಕೃಷಿಗೆ ಪೂರಕವಾಗಿ ಜಾನುವಾರು ಸಾಕುತ್ತಿದ್ದಾರೆ. ಈಗ ಮೇವಿನ ಕೊರತೆಯಿಂದಾಗಿ ಹೈನುಗಾರಿಕೆ ದುಸ್ತರವಾಗಿದೆ. ಕೆಲವು ರೈತರು ತಾವೇ ಸುಧಾರಿತ ಮೇವು ಬೆಳೆಯುತ್ತಾರೆ.
ಬಹುತೇಕ ರೈತರು ಬತ್ತ, ರಾಗಿ ಹುಲ್ಲು, ಜೋಳದ ದಂಟುಗಳನ್ನು ಮೇವಾಗಿ ಬಳಸುತ್ತಾರೆ. ಈ ಒಣ ಮೇವುಗಳನ್ನು ಕತ್ತರಿಸಲು ಈಗ ಸುಧಾರಿತ ಯಂತ್ರಗಳನ್ನು ಬಳಸದೇ ಇರುವುದರಿಂದ ಶೇ.30ರಷ್ಟು ಮೇವು ಹಾಳಾಗಿ ಕೊಟ್ಟಿಗೆಯ ಕಸವಾಗುತ್ತಿದೆ.
ಮಾರುಕಟ್ಟೆಯಲ್ಲಿ ಸಿಗುವ ಮೇವು ಕತ್ತರಿಸುವ ಯಂತ್ರದ ಬೆಲೆ 2,0000ರೂ. ಈ ಯಂತ್ರ ಖರೀದಿಸುವ ಶಕ್ತಿ ಅನೇಕ ರೈತರಿಗೆ ಇಲ್ಲ. ಆದ್ದರಿಂದ ಸರ್ಕಾರ ಈ ವರ್ಷದ ಬಜೆಟ್ನಲ್ಲಿ ಮೇವು ಕತ್ತರಿಸುವ ಯಂತ್ರ ಖರೀದಿಸುವ ರೈತರಿಗೆ ಶೇ 90 ರಷ್ಟು ಸಹಾಯಧನ ಘೋಷಿಸಿದರೆ ರೈತರಿಗೆ ಅನುಕೂಲವಾದೀತು.