ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅಪಹೃತ ವಿದ್ಯಾರ್ಥಿಯ ಹತ್ಯೆ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೈಸೂರು: ಹಣಕ್ಕಾಗಿ ಅಪಹರಿಸಲಾಗಿದ್ದ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ನಗರದ ಹೊರವಲಯದ ಜಯಪುರ ವರುಣಾ ನಾಲೆ ಬಳಿ ಬುಧವಾರ ಸಂಜೆ ಶವ ಪತ್ತೆಯಾಗಿದೆ.

ಕೊಲೆಯಾದ ಸಂಜಯ್ (18), ಹೆಬ್ಬಾಳು ನಿವಾಸಿ ತಾರಾರಾಮ್ ಅವರ ಮೂರು ಮಕ್ಕಳಲ್ಲಿ ಹಿರಿಯವನು. ನಗರದ ವಿದ್ಯಾಶ್ರಮ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ತಾರಾರಾಮ್ ಅವರು ಕಾಳಿದಾಸ ರಸ್ತೆಯಲ್ಲಿ ಪಂಚರತ್ನ ಜ್ಯುವೆಲರಿ ಅಂಗಡಿಯನ್ನು ನಡೆಸುತ್ತಿದ್ದಾರೆ.

ಡಿ.12 ರಂದು ಸಂಜೆ 7 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂಜಯ್‌ನನ್ನು ವಾಹನದಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದರು. ಡಿ.13 ರಂದು ಅಪಹರಣಕಾರರು ಸಂಜಯ್ ಮೊಬೈಲ್‌ನಿಂದಲೇ ತಾರಾರಾಮ್‌ಗೆ ಕರೆ ಮಾಡಿ ರೂ. 50 ಲಕ್ಷಕ್ಕೆ  ಬೇಡಿಕೆ ಇಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT