ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕೈ ಬಿಟ್ಟ ಸಚಿವರು

Last Updated 5 ಜುಲೈ 2016, 9:28 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಂದ್ರ ಸಚಿವ ಸಂಪುಟ ಪುನರ್‍‌ರಚನೆಮಾಡಿದ್ದು, ಸಂಪುಟದಿಂದ ಐವರು ಸಚಿವರನ್ನು ಕೈಬಿಟ್ಟಿದ್ದಾರೆ.

ಜಲಸಂಪನ್ಮೂಲ ಸಚಿವರಾದ ಸನ್ವಾರ್‌ ಲಾಲ್‌, ಪಂಚಾಯತ್‌ ರಾಜ್‌ ಸಚಿವರಾದ ನಿಹಾಲ್‌ ಚಂದ್‌, ಮಾನವ ಸಂಪನ್ಮೂಲ ಸಚಿವರಾದ ರಾಮ್‌ ಶಂಕರ್‌ ಕಟೇರಿಯಾ, ಮನ್ಷುಬಾಯಿ ವಸವಾ (ಬುಡಕಟ್ಟು) ಮೊಹನ್‌ಬಾಯಿ ಕುಂದರಿಯಾ (ಕೃಷಿ) ಅವರುಗಳನ್ನು ಸಂಪುಟದದಿಂದ ಕೈ ಬಿಡಲಾಗಿದೆ.

ಸಂಪುಟದಿಂದ ಕೈಬಿಡಲಾಗಿರುವ ಸಚಿವರು ರಾಜ್ಯಖಾತೆಗಳನ್ನು ಹೊಂದಿದ್ದರು. ಚುರುಕು ಮತ್ತು ದಕ್ಷವಾಗಿ ಖಾತೆಗಳನ್ನು ನಿಭಾಯಿಸುತ್ತಿಲ್ಲದಿದ್ದರಿಂದ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT