ಮೆಹೋಬ (ಉತ್ತರಪ್ರದೇಶ) (ಪಿಟಿಐ) : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೂಕ್ಷ್ಮವ್ಯಕ್ತಿ. ಅವರ ಹೇಳಿಕೆಯನ್ನು ತಿರುಚಲಾಗಿದೆ' ಎನ್ನುವ ಮೂಲಕ ಬಿಎಸ್ಪಿ ಸಂಸದ ವಿಜಯ ಬಹದ್ದೂರ್ ಅವರು 2002ರ ಕೋಮು ಗಲಭೆ ಸಂಬಂಧ `ನಾಯಿಮರಿ' ವಿವಾದಲ್ಲಿ ಸಿಲುಕಿರುವ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
`ಎಲ್ಲರೂ ತಮ್ಮದೇ ಆದ ದೃಷ್ಟಿಕೋನ ಹೊಂದಿರುತ್ತಾರೆ. ಆದರೆ ಮೋದಿ ಅವರ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಬಾರದು. ಅವರ ಹೇಳಿಕೆಗಳು ರಾಷ್ಟ್ರದ ಹಿತಾಸಕ್ತಿಯಿಂದ ಕೂಡಿವೆ. ಅವರು ಯಾವುದೇ ಸಮುದಾಯವನ್ನು ಉಲ್ಲೇಖಿಸುತ್ತಿಲ್ಲ. ರಾಜಕೀಯ ಹಿತಾಸಕ್ತಿಯಿಂದಾಗಿ ಅವರ ಅಭಿಪ್ರಾಯವನ್ನು ವಿರೋಧಿಸಲಾಗುತ್ತಿದೆ. ಅಂಥವರು ರಾಷ್ಟ್ರದ್ರೋಹಿಗಳು' ಎಂದು ಬಹದ್ದೂರ ಶನಿವಾರ ಪಿಟಿಐಗೆ ತಿಳಿಸಿದರು.