ನವದೆಹಲಿ (ಐಎಎನ್ಎಸ್): ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಉತ್ತಮ ಸಾಧನೆಗೆ ‘ಪಕ್ಷದ ಎಲ್ಲ ಸದಸ್ಯರ ಅದರಲ್ಲೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಶ್ರಮ ಕಾರಣ’ ಎಂದು ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.
ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿ ಪಾತ್ರದ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಡ್ವಾಣಿ, ‘ಪಕ್ಷದ ಎಲ್ಲ ಸದಸ್ಯರ, ಅದರಲ್ಲೂ ಮುಖ್ಯಮಂತ್ರಿ ರಮಣ ಸಿಂಗ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ಪಾತ್ರ ಇದರಲ್ಲಿದೆ’ ಎಂದರು.