ಮುಂಬೈ (ಪಿಟಿಐ): ಆರ್ಎಸ್ಎಸ್, ಗಡ್ಕರಿ ಮತ್ತು ಅಡ್ವಾಣಿ ಅವರ ಕೂಟ ನರೇಂದ್ರ ಮೋದಿ ಅವರಿಗೆ ತೊಡರುಗಾಲು ಹಾಕುತ್ತಿದೆ ಎಂದು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಟೀಕಿಸಿದ್ದಾರೆ.
ಶನಿವಾರ ನವದೆಹಲಿಯಲ್ಲಿ ಮುಕ್ತಾಯವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ನರೇಂದ್ರ ಮೋದಿ ಹಾಜರಾಗದಿರಲು ಅಡ್ವಾಣಿ ಜತೆಗಿನ ಭಿನ್ನಮತವೇ ಕಾರಣ ಎಂಬ ವಿಶ್ಲೇಷಣೆ ದಟ್ಟವಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಠಾಕ್ರೆ ಪಕ್ಷದ ಮುಖವಾಣಿ `ಸಾಮ್ನಾ~ದ ಸಂಪಾದಕೀಯದಲ್ಲಿ ಹೀಗೆ ಹೇಳಿದ್ದಾರೆ.