ಮೌಂಟ್ ಅಬು: ಇಲ್ಲಿನ ಪರ್ವತ ಶ್ರೇಣಿಯ ಸುಂದರ ಪರಿಸರದಲ್ಲಿ ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಮಾಧ್ಯಮ ಸಮ್ಮೇಳನಕ್ಕೆ ವೇದಿಕೆ ಸಿದ್ಧವಾಗಿದೆ. ಇದೇ 17ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮಾಧ್ಯಮದವರನ್ನು ಗುರುವಾರ ಸಂಜೆ ಬರಮಾಡಿಕೊಳ್ಳಲಾಯಿತು. ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. 75ನೇ ವಾರ್ಷಿಕೋತ್ಸವದ ಅಂಗವಾಗಿ `ಮಾಧ್ಯಮದ ಹುಟ್ಟು-ಬೆಳವಣಿಗೆ ಹಾಗೂ ಸವಾಲುಗಳು~ ಕುರಿತು ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಈ ಪ್ರದರ್ಶನವನ್ನು ಬಿ.ಕೆ. ಓಂ ಪ್ರಕಾಶ ಸ್ವಾಮೀಜಿ ಅವರು ಶುಕ್ರವಾರ ಉದ್ಘಾಟಿಸಿದರು. ಬಿ.ಕೆ. ಉಷಾ ಬೆಹನ್, ಕಮಲಾ ದೀಕ್ಷಿತ್, ಡಾ. ನಿರಂಜನಾ ಬೆಹನ್, ಸಾಂತನು ಬಾಯಿ ಅವರು ಹಾಜರಿದ್ದರು.