ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಸುಭಾಸ ಎನ್.ನರೇಂದ್ರ, `ನಮ್ಮ ಬದುಕಿನ ವಿವಿಧ ಸ್ತರ, ಅನುಭವ, ಅಭಿವ್ಯಕ್ತಿ ಮತ್ತು ಜೀವನದ ಏರು ಪೇರುಗಳನ್ನು ರಂಗದ ಮೂಲಕ ಅನಾವರಣಗೊಳಿ ಸುವ ಕಲೆಯೇ ನಾಟಕ. ನಾಟಕ ಮನೋರಂಜನೆಯ ಮಾಧ್ಯಮವಾಗದೇ ಇಂದು ಸಾಮಾಜಿಕ ಬದಲಾವಣೆಯ ಸೂತ್ರವೂ ಆಗಿದೆ. ಹೀಗಾಗಿ ಗ್ರಾಮೀಣ ಪರಿಸರದಲ್ಲಿ ಬಹು ಜೋಪಾನವಾಗಿ ರಂಗಪ್ರೀತಿಯನ್ನು ಉಳಿಸಿಕೊಂಡು ಬಂದಿರುವ ಜನತೆಯ ಮುಂದೆ ಈಗ ರಂಗಾಯಣ ಬಂದಿದೆ. ಹವ್ಯಾಸಿ, ವೃತ್ತಿ ರಂಗಭೂಮಿ ಎಂಬ ಭೇದವಲ್ಲದೇ ಒಟ್ಟು ನಾಟಕಗಳ ಮೂಲಕ ಜನಜಾಗೃತಿಯ ಜೊತೆಗೆ ಮನರಂಜನೆಯನ್ನು ಒದಗಿಸಿ ರಂಗ ಕ್ರಾಂತಿಯ ಕಿಡಿ ಹೊತ್ತಿಸುವ ಉದ್ದೇಶ ರಂಗಾಯಣದ್ದು' ಎಂದರು.