ಧಾರವಾಡ: `ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರಕಾರ ಜನಪ್ರಿಯವಾಗಲು ಅಲ್ಲಿನ ಜನರ ನಿರಂತರ ಪ್ರೋತ್ಸಾಹವೂ ಮುಖ್ಯ. ಆದರೆ ಆ ಬಗೆಯ ಪ್ರೋತ್ಸಾಹ ಉತ್ತರ ಕರ್ನಾಟಕದ ಬಯಲಾಟ, ಸಣ್ಣಾಟ, ದೊಡ್ಡಾಟ, ಸೋಗು, ಪಾರಿಜಾತಕ್ಕೆ ಸಿಕ್ಕಿಲ್ಲ' ಎಂದು ಹಿರಿಯ ಸಾಹಿತಿ ಡಾ.ಬಾಳಣ್ಣ ಸೀಗಿಹಳ್ಳಿ ವಿಷಾದಿಸಿದರು.
ಇಲ್ಲಿಯ ಕಲ್ಯಾಣ ನಗರದ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಕರ್ನಾಟಕ ಸಂಘವು ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಯಾರಿಗಾದರೂ ಮದುವೆಯಾದರೆ ಅಥವಾ ಮಕ್ಕಳಾದರೆ ಅವರು ಕೆಲ ವರ್ಷ ಕಾಲ ಯಕ್ಷಗಾನ ತಂಡವನ್ನು ಪ್ರಾಯೋಜಿಸುವ ಇಲ್ಲವೇ ಪ್ರದರ್ಶನ ಏರ್ಪಡಿಸುವ ಘೋಷಣೆ ಮಾಡುತ್ತಾರೆ. ಡಾ.ಶಿವರಾಮ ಕಾರಂತ ಅವರಂತಹ ದಿಗ್ಗಜರು ದುಡಿದಿದ್ದರಿಂದ ಯಕ್ಷಗಾನ ವಿದೇಶಗಳಲ್ಲೂ ಪ್ರದರ್ಶನ ನೀಡುವಂತಾಯಿತು' ಎಂದರು.