ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯದು ವಂಶದ ಕೊನೆಯ ಕುಡಿ ಹೇಗೆ?

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಶ್ರೀಕಂಠದತ್ತ ಒಡೆಯರ್ ಅವರ ಸಾವಿನ ಸಂದರ್ಭದಲ್ಲಿ ಅವರನ್ನು ‘ಯದು ವಂಶದ ಕೊನೆಯ ಕುಡಿ’ ಎಂದು ಬಿಂಬಿಸಲಾಗುತ್ತಿದೆ. ವಾಸ್ತ­ವವಾಗಿ ಜಯಚಾಮರಾಜ ಒಡೆಯರ್‌ಗೆ ಶ್ರೀಕಂಠದತ್ತ ಅವರ ಜೊತೆಗೆ ಐವರು ಹೆಣ್ಣು ಮಕ್ಕಳೂ ಇದ್ದಾರೆ. ಇವರೂ ಯದು ವಂಶದ ಕುಡಿ­ಗಳೇ. ಇವರನ್ನೆಲ್ಲ ನಿರ್ಲಕ್ಷಿಸಿ ಶ್ರೀಕಂಠದತ್ತ ಒಡೆಯರ್ ಅವರ ನಿಧನದಿಂದ ಯದು ವಂಶದ ಕೊನೆಯ ಕೊಂಡಿ ಕಳಚಿತೆಂದು ಪರಿಭಾ­ವಿಸುವುದು ಲಿಂಗತಾರತಮ್ಯದ ಸ್ಪಷ್ಟ ನಿದರ್ಶನ. ಗಂಡು ಮಗು ಮಾತ್ರ ವಂಶೋ­ದ್ಧಾರಕ; ಹೆಣ್ಣು ಮಕ್ಕಳು ಕೇವಲ ವಂಶವೃಕ್ಷದ ಟೊಂಗೆಗಳಾಗಿ ಉಳಿಯಬೇಕು ಎಂಬುದು ಈ ಆಧುನಿಕ ಯುಗದಲ್ಲೂ ಪ್ರಸ್ತುತವೇ?

ಹಾಗೆ ನೋಡಿದರೆ ಪ್ರಜಾಪ್ರಭುತ್ವ ವ್ಯವ­ಸ್ಥೆ­ಯಲ್ಲಿ ಉತ್ತರಾಧಿಕಾರಿ ಎಂಬುದು ರಾಜ­ವಂಶಸ್ಥರೇ ಆಗಿರಲಿ, ಜನಸಾಮಾನ್ಯರೇ ಆಗಿ­ರಲಿ ಅವರ ಕುಟುಂಬದ ಆಸ್ತಿಪಾಸ್ತಿಗೆ ಸಂಬಂ­­ಧಿಸಿದ್ದು. ಹಾಗಾಗಿ ಸಾರ್ವಜನಿಕವಾಗಿ ಈ ಬಗ್ಗೆ ಗಂಭೀರ ಚರ್ಚೆಗೆ ಕಾರಣವಿಲ್ಲ. ಆದರೆ ಸಾಮಾ­ಜಿಕ­ವಾಗಿ, ನೈತಿಕವಾಗಿ ಹಾಗೂ ಕಾನೂನಿನಡಿ ಸಮಾನ ಸ್ಥಾನಮಾನಕ್ಕೆ ಅರ್ಹಳಾದ ಮಹಿಳೆ­ಯ­ರನ್ನು ಮಾಧ್ಯಮಗಳಲ್ಲಿ ಕಡೆಗಣಿಸಿ ಲಿಂಗ ತಾರತಮ್ಯ ಮಾಡುವುದು ಎಷ್ಟು ಸರಿ?

ಅಲ್ಲದೇ ಅಲಮೇಲಮ್ಮನ ಶಾಪದಂತೆ ಯದು ವಂಶದ ರಾಜರಿಗೆ ಗಂಡು ಮಕ್ಕಳಾಗುವುದಿಲ್ಲ ಎಂಬುದು ಬಹು ದೊಡ್ಡ ಮೂಢನಂಬಿಕೆ. ಈ ಬಗ್ಗೆ ವೈದ್ಯಕೀಯ ವಿಶ್ಲೇಷಣೆ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT