ಜಿಲ್ಲೆಯಲ್ಲಿ 17 ಅಕ್ಕಿ ಗಿರಣಿಗಳಿದ್ದು, ರಾಜ್ಯ ಅಕ್ಕಿ ಗಿರಣಿದಾರರ ಸಂಘ ಕರೆ ನೀಡಿರುವ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಭಟನೆ ಬೆಂಬಲಿಸಿ ಜಿಲ್ಲೆಯ ಎಲ್ಲ ಅಕ್ಕಿ ಗಿರಣಿಗಳು ಮತ್ತು ಕೃಷಿ ಸಂಸ್ಕರಣ ಘಟಕಗಳು ಸೋಮವಾರದಿಂದ ಅನಿರ್ದಿಷ್ಟಾವಧಿಯ ಮುಷ್ಕರ ಆರಂಭಿಸಿವೆ.
ಪ್ರತಿ ವರ್ಷ ಸರ್ಕಾರ ಅಕ್ಕಿ ಗಿರಣಿದಾರರ ಜೊತೆ ಸಭೆ ನಡೆಸಿ, ಲೇವಿ ಅಕ್ಕಿಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿತ್ತು. ಆದರೆ ಈ ಬಾರಿ ಸರ್ಕಾರ ಯಾವುದೇ ಸಭೆ ನಡೆಸದೇ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ. ಇದರಿಂದ ಗಿರಣಿ ಮಾಲೀಕರಿಗೆ ತೀವ್ರ ಹಾನಿಯಾಗುತ್ತದೆ. ಗಿರಣಿದಾರರ ಜೊತೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಕ್ಕಿ ಗಿರಣಿ ಮಾಲೀಕರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಬೇಡಿಕೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಪ್ರತಿಭಟನೆ ಶಾಂತಿಯುತವಾಗ ನಡೆಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮೌಲಾಲಿ ಅನಪುರ, ಮಹ್ಮದ್ ರಶೀದ್, ಹನುಮಾನದಾಸ ಮುಂದಡಾ, ವೀರಭದ್ರಯ್ಯ ಸ್ವಾಮಿ, ಬಸವರಾಜ ಸಜ್ಜನ್, ವಿಜಯ ದಿಗ್ಗಾಯಿ ಇದ್ದರು