ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ತನಿಖೆ ಏಕಿಲ್ಲ?: ಕುಲಕರ್ಣಿ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಪ್ರಕರಣದಿಂದ ಯಾರಿಗೆ ಲಾಭವಾಗಿದೆಯೋ ಅವರನ್ನು ಪೊಲೀಸರು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ಈ ಹಗರಣದ ಆಪಾದನೆ ಮೇಲೆ ಬಂಧಿತರಾದ ಸುಧೀಂದ್ರ ಕುಲಕರ್ಣಿ ನ್ಯಾಯಾಲಯದಲ್ಲಿ ಶನಿವಾರ ಪ್ರಶ್ನಿಸಿದ್ದಾರೆ.

ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ ಅವರು, `ಈ ಪ್ರಕರಣದಲ್ಲಿ ಯುಪಿಎ-1 ಸರ್ಕಾರದ `ಅನೇಕರು~ ನೈಜ ಫಲಾನುಭವಿಗಳು ಮತ್ತು  ಆರೋಪಿಗಳು. ಆದರೆ ಅವರನ್ನು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮುಟ್ಟಲು ಆಗಿಲ್ಲ~ ಎಂದರು.

`ನೈಜ ಫಲಾನುಭವಿಗಳು ಯಾರು ಎಂದು ಪ್ರಶ್ನಿಸಿದರೆ ಪೊಲೀಸರು ನಿರುತ್ತರರಾಗುತ್ತಾರೆ. ಏಕೆಂದರೆ ಯುಪಿಎ-1 ಸರ್ಕಾರವೇ ನಿಜವಾದ ಫಲಾನುಭವಿ. ಆ ಸರ್ಕಾರದಲ್ಲಿದ್ದ ಯಾರನ್ನೂ ಪೊಲೀಸರು ತನಿಖೆಗೆ ಒಳಪಡಿಸಿಲ್ಲ~ ಎಂದು ಸುಧೀಂದ್ರ ಕುಲಕರ್ಣಿ ಪರ ವಕೀಲರು ಆರೋಪಿಸಿದರು.

`ಸಂಸದರಿಗೆ ಆಮಿಷ ಒಡ್ಡಲು ಅಷ್ಟೊಂದು ಹಣ ಎಲ್ಲಿಂದ ಬಂತು? ಅಮರ್ ಸಿಂಗ್‌ಗೆ ಹಣ ನೀಡಿದವರು  ಯಾರು? ಪೊಲೀಸರು ಈ ಹಣದ ಜಾಡನ್ನು ಭೇದಿಸಲು ವಿಫಲರಾಗಿದ್ದಾರೆ. ಹಾಗಾಗಿ ಇದು ಈಗಲೂ ಬಗೆಹರಿಯದ ಪ್ರಶ್ನೆಯಾಗಿದೆ~ ಎಂದರು.

`ನನ್ನ ಕಕ್ಷಿದಾರರು ಮುಗ್ಧರು. ಅವರು ಹಣ ಮಾಡಿಕೊಳ್ಳಲು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಲವಲೇಶದ ಸಾಕ್ಷಿಯೂ ಇಲ್ಲ. ವಿಶ್ವಾಸ ಮತಗಳಿಸಲು ಸರ್ಕಾರ ಪ್ರತಿಪಕ್ಷಗಳ ಸಂಸದರನ್ನು ಖರೀದಿಸಲು ತೊಡಗಿತ್ತು. ಭ್ರಷ್ಟಾಚಾರದ ಈ ಅತಿರೇಕವನ್ನು ಬಹಿರಂಗಪಡಿಸಲು ನನ್ನ ಕಕ್ಷಿದಾರರು ಮಾಡಿದ ಪ್ರಯತ್ನ ಅದು (ಸಂಸತ್‌ನಲ್ಲಿ ಹಣದ ಕಂತೆಗಳ ಪ್ರದರ್ಶನ)~ ಎಂದು ಕುಲಕರ್ಣಿ ಪರ ವಕೀಲರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT