ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ಕ್ರಾಸ್ನಲ್ಲಿರುವ ಬಣ್ಣ ಅಭಿನಯ ಶಾಲೆಯ ತಿಂಗಳ ವಿಶೇಷ ತರಗತಿ `ಅನುಭವ ಮಂಟಪ~ದಲ್ಲಿ ರಂಗಭೂಮಿ, ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ವಿದ್ಯಾರ್ಥಿಗಳಿಗೆ ಅಭಿನಯದ ಬಗೆಗಿನ ವಿವಿಧ ಪ್ರಕಾರಗಳನ್ನು ಹೇಳಿಕೊಟ್ಟರು.
ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಯಲ್ಲಿನ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರಂಗಾಭಿನಯದಲ್ಲಿನ ಸವಾಲುಗಳ ಬಗೆಗೂ ಮಾಹಿತಿ ನೀಡಿದರು.
ಸಂಸ್ಥೆಯ ಸಂಸ್ಥಾಪಕ ನಾಗರಾಜ ಕೋಟೆ ಮಂಡ್ಯ ರಮೇಶ್ ಅರವರನ್ನು ಸನ್ಮಾನಿಸಿದರು.