ರಾಯಬಾಗ: ತಾಲ್ಲೂಕಿನ ಸವಸುದ್ದಿ ಗ್ರಾಮದ ಯುವತಿಯೊಬ್ಬಳ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿ, ಅವಳನ್ನು ಅಥಣಿಯಲ್ಲಿ ಬಿಟ್ಟು ಹೋದ ಘಟನೆ ಭಾನುವಾರ ನಡೆದಿದೆ. ಈಕೆಯನ್ನು ಗೊಕಾಕ ತಾಲ್ಲೂಕಿನ ರಾಜಾಪುರದ ಹನುಮಂತ ಆರ್. ವಾಟೆದ (25) ಎಂಬಾತ ಕಳೆದ 26ರಂದು ವಂಚಿಸಿ ಕರೆದುಕೊಂಡು ಹೋಗಿದ್ದನಂತೆ. ಯುವತಿಯು ಹನುಮಂತನ ವಿರುದ್ಧ ಸ್ಥಳೀಯ ಠಾಣೆಗೆ ಭಾನುವಾರ ದೂರು ನೀಡಿದ್ದಾಳೆ.