ನವದೆಹಲಿ (ಪಿಟಿಐ): ಭಾರತ ತಂಡಕ್ಕೆ ಯುವರಾಜ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
`ಯುವಿ ತಂಡಕ್ಕೆ ಆಯ್ಕೆಯಾದರು ಎನ್ನುವ ವಿಷಯ ಕೇಳಿ ಕೊಂಚ ಅಚ್ಚರಿಯಾಯಿತು. ಅದರ ಬೆನ್ನಲ್ಲೇ ಸಂತಸವೂ ಆಯಿತು. ಅನಾರೋಗ್ಯದಿಂದ ಬಳಲಿದ್ದ ಅವರು ಮತ್ತೆ ಸ್ಥಾನ ಪಡೆದದ್ದು ಸಂತೋಷವಾಗಿದೆ~ ಎಂದು ಗಂಗೂಲಿ ನುಡಿದರು. ಇವರ ಹೇಳಿಕೆಗೆ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಕೂಡಾ ಧ್ವನಿಗೂಡಿಸಿದ್ದಾರೆ.