ನೆಲಮಂಗಲ: `ಯೋಗದಿಂದ ಏಕಾಗ್ರತೆ ಬರುತ್ತದೆ. ಧ್ಯಾನದಿಂದ ಆಜ್ಞಾನ ದೂರವಾಗುತ್ತದೆ. ಅಂತರಂಗ ಶುದ್ಧವಾಗಲು ಯೋಗ ಧ್ಯಾನಗಳೆರಡೂ ಅಗತ್ಯ~ ಎಂದು ಆರ್ಟ್ ಆಫ್ ಲಿವಿಂಗ್ನ ಅಧ್ಯಕ್ಷ ಶ್ರೀ ಶ್ರೀ ರವಿಶಂಕರ ಗುರೂಜಿ ತಿಳಿಸಿದರು.
ಸ್ಥಳೀಯ ಬಸವಣ್ಣದೇವರ ಮಠದಲ್ಲಿ ನಿಸರ್ಗ ಭಾರತಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ `ಮಹಾ ಸತ್ಸಂಗ~ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಕೊಳೆಗೇರಿ ಜನರ ಸುಧಾರಣೆಗೆ ಮುಂದಾಗಬೇಕು, ರೈತರು ವಿಷಪೂರಿತ ಗೊಬ್ಬರ ಬಳಸಿ ಭೂ ತಾಯಿಯನ್ನು ಮಲಿನ ಮಾಡದೆ ಸಾವಯವ ಕೃಷಿಯಲ್ಲಿ ತೊಡಗಬೇಕು ಪಾವಿತ್ರ್ಯವನ್ನು ಕಾಪಾಡಬೇಕು~ ಎಂದು ಸೂಚಿಸಿದರು.
`ಬೇರೆಯವರ ಬಗ್ಗೆ ಕಲ್ಪನೆ ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಕಾಲ ಹರಣ ಮಾಡದೆ, ಸೇವೆಯಲ್ಲಿ ತೊಡಗಿಸಿಕೊಂಡು, ಸುತ್ತಮುತ್ತಲ ವಾತಾವರಣ ಶುಚಿಯಾಗಿಡಬೇಕು~ ಎಂದು ಅವರು ಕರೆ ನೀಡಿದರು.