ಶಿರ್ವ(ಕಟಪಾಡಿ): `ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈವರೆಗೆ ಕೈಗೊಂಡಿರುವ ಎಲ್ಲ ಯೋಜನೆಗಳು ವಿಫಲವಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ದೇಶದ ಹಣಕಾಸು ವ್ಯವಸ್ಥೆ ಹಿಂದೆ ಬೀಳಲು ಕಾರಣ~ ಎಂದು ಆರ್ಥಿಕ ತಜ್ಞ ಡಾ. ಜಿ.ವಿ. ಜೋಷಿ ಅಭಿಪ್ರಾಯ ಪಟ್ಟರು.
ವಿತ್ತೀಯ ಸೇರ್ಪಡೆ ಮಹತ್ವದ ಕುರಿತು ಶಿರ್ವದ ಎಂ.ಎಸ್. ಆರ್.ಎಸ್. ಕಾಲೇಜಿನಲ್ಲಿ ಯು.ಜಿ.ಸಿ. ಪ್ರಾಯೋಜಕತ್ವದಡಿಯಲ್ಲಿ ಶುಕ್ರವಾರ ಜರುಗಿದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. `ಆರ್ಥಿಕ ಸಬಲತೆಗೆ ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕಾಗಿದೆ. ಭಾರತದಲ್ಲಿ 450 ಮಿಲಿಯನ್ಗೂ ಅಧಿಕ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಇನ್ನೂ ಮಾಹಿತಿ ಇಲ್ಲ~ ಎಂದರು.
`ಕರಾವಳಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿಗೆ ಮೂಲ್ಕಿ ಸುಂದರ್ರಾಂ ಶೆಟ್ಟಿ ಅವರ ಕೊಡುಗೆ ಅಪಾರ~ ಎಂದರು.
ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ಯಶವಂತ್ ದೊಂಗ್ರೆ ಮಾತನಾಡಿ, `ಹಣಕಾಸು ವ್ಯವಸ್ಥೆ ವ್ಯವಸ್ಥಿತವಾಗಿ ಪ್ರಗತಿ ಕಾಣಬೇಕಾದರೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಸಾರ್ವಜನಿಕ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ನೀರು ಇನ್ನಿತರ ಮೂಲಸೌಕರ್ಯ ಯೋಜನೆಗಳು ತಳಮಟ್ಟದ ಗ್ರಾಮೀಣ ಪ್ರದೇಶದ ಜನರಿಗೂ ತಲುಪಬೇಕು~ ಎಂದರು.
ಕಾಲೇಜಿನ ಸಂಚಾಲಕ ಕೆ.ರಾಜರಾಂ ಶೆಟ್ಟಿ, ಪ್ರಾಂಶುಪಾಲ ಸುಧಾಕರ ಮಾರ್ಲ, ಉಪನ್ಯಾಸಕರಾದ ಕರುಣಾಕರ ನಾಯಕ್, ವಿನೋಭ್ ನಾಥ್, ಸುಬ್ರಹ್ಮಣ್ಯ ಭಟ್, ಸುಪ್ರಿತಾ ಶೆಟ್ಟಿ, ಸಂದೀಪ್ ಮತ್ತಿತರರಿದ್ದರು.