ಕಲಾನಿಕೇತನ: ಶನಿವಾರ `ರಂಗಜಂಗಮ~ ವತಿಯಿಂದ ಸಂಸ್ಕೃತಿ ಹಬ್ಬ ನಾಟಕೋತ್ಸವ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಮತ್ತು ರಂಗಗೀತೆಗಳ ಗಾಯನ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ. ಬಳಿಕ ಜಿ.ಶೀಲಾ ನಾಯ್ಡು ಅವರಿಂದ ಕಥಾಕಲಾಕ್ಷೇಪ.
`ಕೂಡಲ ಸಂಗಮ~ ಬಸವಣ್ಣನವರ ವಚನಗಳನ್ನಾಧರಿಸಿದ ದೃಶ್ಯ ರೂಪಕ. ಸಂಗೀತ: ಸಿ.ಅಶ್ವತ್. ಸಾಹಿತ್ಯ ಮತ್ತು ಪರಿಕಲ್ಪನೆ: ಪ್ರಸಾದ್ ಕುಂದೂರು. ನಿರ್ದೇಶನ: ಸುಗುಣ ಎಂ.ಎಂ.
ಉದ್ಘಾಟನೆ-ಡಾ.ಸಿದ್ಧಲಿಂಗಯ್ಯ. ಅತಿಥಿಗಳು: ದೊಡ್ಡರಂಗೇಗೌಡ, ಡಿ.ಕೆ.ಚೌಟ.
ಭಾನುವಾರ `ಭಕ್ತ ಕನಕದಾಸ~ ನಾಟಕ ಪ್ರದರ್ಶನ. ನಿರ್ದೇಶನ-ರತ್ನ ನಾಗೇಶ್, ಬಿಜಾಪುರದ ಎಸ್ ಗಣೇಶ್ ಅವರಿಂದ ವಚನಗಾಯನ.
ಅತಿಥಿಗಳು- ಎಸ್.ಟಿ.ಸೋಮ್ಶೇಖರ್, ನಟ ಅನಿಲ್ ಕುಮಾರ್.
ಸ್ಥಳ: ಕೆ.ಗೊಲ್ಲಹಳ್ಳಿ ರಂಗಮಂದಿರ, ಕುಂಬಳಗೂಡು. ನಿತ್ಯ ಸಂಜೆ 4.