ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಮಂದಿರ ನಿರ್ಮಾಣ: ಶ್ಲಾಘನೆ

Last Updated 21 ಡಿಸೆಂಬರ್ 2013, 20:08 IST
ಅಕ್ಷರ ಗಾತ್ರ

ಯಲಹಂಕ: ಟೆಲಿಕಾಂ ಎಂಪ್ಲಾಯೀಸ್ ಕೋ–ಆಪರೇಟಿವ್ ಹೌಸಿಂಗ್ ಸೊಸೈಟಿ ಹಾಗೂ ಟೆಲಿಕಾಂ ಬಡಾವಣೆ ನಿವಾಸಿ­ಗಳ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಆಶ್ರಯದಲ್ಲಿ ಶ್ರೀರಾಮಪುರ ಸಮೀಪದ ಟೆಲಿಕಾಂ ಬಡಾವಣೆಯಲ್ಲಿ ನಡೆದ ನೂತನ ರಂಗಮಂದಿರ ಗುದ್ದಲಿ ಪೂಜೆ  ಹಾಗೂ ಸಂಘದ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ಕೃಷಿ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು.

ನಂತರ  ಮಾತನಾಡಿದ ಅವರು, ₨1 ಕೋಟಿ ವೆಚ್ಚದಲ್ಲಿ ನೂತನ ರಂಗ­ಮಂದಿರ­ವನ್ನು ನಿರ್ಮಾಣ ಮಾಡುವ ಮೂಲಕ ಬಡಾವಣೆಯ ನಿವಾಸಿಗಳಿಗೆ ಮನರಂಜನೆ ಒದಗಿಸಲು ಮುಂದಾಗಿರು­ವುದು ಶ್ಲಾಘನೀಯ ಎಂದರು.

ರಂಗಭೂಮಿ ಕಲಾವಿದ ಮಾ.ಹಿರಣ್ಣಯ್ಯ, ಒಬ್ಬ ವ್ಯಕ್ತಿಯು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಲು ರಂಗಭೂಮಿ ನೆರವಾಗುತ್ತದೆ. ಅಲ್ಲದೆ ರಂಗಭೂಮಿಯಿಂದ ವೈಯಕ್ತಿಕ ಬೆಳವಣಿಗೆಯೊಂದಿಗೆ ಸಮಾಜದ ಓರೆ ಕೋರೆಗಳನ್ನು ತಿದ್ದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT