ಬೆಂಗಳೂರು: `ಶಿವಮೊಗ್ಗ ಮತ್ತು ಧಾರವಾಡ ರಂಗಾಯಣದ ಕಲಾವಿದರ ನಿಯೋಜನೆಯನ್ನು ರದ್ದು ಮಾಡಲಾಗಿದೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್.ರಾಮಕೃಷ್ಣ ಹೇಳಿದರು.
ಮಂಗಳವಾರ ನಡೆದ ಸಭೆಯಲ್ಲಿ `ಹದಿನೆಂಟು ಕಲಾವಿದರನ್ನು ಮೈಸೂರಿನ ರಂಗಾಯಣಕ್ಕೆ ವಾಪಸ್ ಕಳುಹಿಸಲು ತೀರ್ಮಾನಿಸಲಾಗಿದೆ' ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ರಂಗಸಮಾಜದ ಸದಸ್ಯ ಮಂಡ್ಯ ರಮೇಶ್, ರಂಗಾಯಣ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.