ಬಸವನಗುಡಿಯ ಅಂತರಂಗ ತಂಡ ಹವ್ಯಾಸಿ ರಂಗಭೂಮಿಯಲ್ಲಿ ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ಅನೇಕ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಅಂತರಂಗ ತಂಡಕ್ಕೆ ಈಗ 31ರ ಹರೆಯ.
ಇದರ ಅಂಗವಾಗಿ ಬುಧವಾರದಿಂದ ನ.20ರ ವರೆಗೆ `ರಂಗೋಲ್ಲಾಸ ಉತ್ಸವ~. ಈ ಸಂದರ್ಭದಲ್ಲಿ 5 ನಾಟಕಗಳು ಪ್ರದರ್ಶನಗೊಳ್ಳಲಿವೆ.
ಬುಧವಾರ ಸಂಜೆ 6.30ಕ್ಕೆ ರಂಗೋಲ್ಲಾಸ ಉತ್ಸವಕ್ಕೆ ಕಾ.ತ.ಚಿಕ್ಕಣ್ಣ ಚಾಲನೆ ನೀಡಲಿದ್ದಾರೆ. ಅತಿಥಿ: ರಂಗಾಯಣ ನಿರ್ದೇಶಕ ಡಾ. ಬಿ.ವಿ.ರಾಜಾರಾಂ. ನಂತರ ವ್ಯಾಸ್ಟ್ ತಂಡದಿಂದ `ಸಂಜೆ ಹಾಡು~ ಹಾಸ್ಯ ನಾಟಕ (ನಿರ್ದೇಶನ: ರಾಜೇಂದ್ರ ಕಾರಂತ್).
ಸ್ಥಳ: ಕೆ.ಎಚ್. ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ, ಹನುಮಂತನಗರ.