ಮುಂಬೈ (ಪಿಟಿಐ) : ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ ಬಳಿಕ ಸಚಿನ್ ತೆಂಡೂಲ್ಕರ್ ಬರೋಡ ವಿರುದ್ಧ ಜನವರಿ 6ರಿಂದ ನಡೆಯಲಿರುವ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಆಡಲಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ಮಂಗಳವಾರ ತಿಳಿಸಿದರು.
ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಗುರುವಾರ ಮುಂಬೈ ಆಟಗಾರರ ಆಯ್ಕೆ ನಡೆಯಲಿದ್ದು, ಬರೋಡ ವಿರುದ್ಧ ಸಚಿನ್ ಕಣಕ್ಕಿಳಿಯುತ್ತಿರುವುದು ಪಂದ್ಯಕ್ಕೆ ಮತ್ತಷ್ಟು ಮೆರಗು ಬರಲಿದೆ ಎಂದು ದಲಾಲ್ ಹೇಳಿದರು.