ಮಂಗಳೂರು: ರಾಜ್ಯದ ರಫ್ತು ಪ್ರಮಾಣ ಹೆಚ್ಚಿಸಲು ಮುನ್ನೋಟ ನೀತಿ ಸಿದ್ಧಪಡಿಸುವ ಸಲುವಾಗಿ (ಕರ್ನಾಟಕ ರಫ್ತು ದೂರದರ್ಶಿತ್ವ-2020) ಫೆ. 13ರಂದು ಇಲ್ಲಿ ರಾಜ್ಯದ ರಫ್ತುದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ದೇಶದ ಒಟ್ಟು ರಫ್ತಿನಲ್ಲಿ ರಾಜ್ಯದ ಈಗಿನ ಪಾಲು ಶೇ. 6ರಷ್ಟಿದ್ದು, ಅದನ್ನು ಶೇ. 10ರಷ್ಟಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಮಾವೇಶದ ವೇಳೆ ಸಿದ್ಧಪಡಿಸಲಾಗುವುದು ಎಂದು `ಎಫ್ಐಇಒ~ ದಕ್ಷಿಣ ಭಾರತೀಯ ಘಟಕ ಅಧ್ಯಕ್ಷ ವಾಲ್ಟರ್ ಡಿಸೋಜ ಇಲ್ಲಿ ತಿಳಿಸಿದ್ದಾರೆ.