ಸುಬ್ರಹ್ಮಣ್ಯ: ಜನ-ಮನ ಸಾಂಸ್ಕೃತಿಕ ಘಟಕ ಹಾಗೂ ನುಡಿಮುತ್ತು ಸೇವಾ ಪ್ರತಿಷ್ಠಾನದಿಂದ ಶನಿವಾರ ಬೆಂಗಳೂರಿನ ಪುರಭವನದಲ್ಲಿ ನಡೆದ ಸಾಧಕರ ಸಂಗಮ-2012 ಸಮಾರಂಭದಲ್ಲಿ ಸುಬ್ರಹ್ಮಣ್ಯದ ರವಿಕಕ್ಕೆಪದವು ಹಾಗೂ ಬಿ.ವಿಠಲ್ ರಾವ್ ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತೆ ಬಸವಾಂಜಲಿ, ಬಾಲಯೋಗಿ ಸಾಯಿ ಮಂಜುನಾಥ ಸ್ವಾಮೀಜಿ, ಡಾ.ಕೆ.ಪಿ ಪುತ್ತೂರಾಯ, ರಾಮಚಂದ್ರ ಮೂರ್ತಿ, ಡಾ.ಎನ್.ಮೂರ್ತಿ, ಜಿ.ಎಂ. ಚಂದ್ರಶೇಖರ್, ಸಾಯಿಗೋಲ್ಡ್ ಪ್ಯಾಲೇಸ್ನ ಮಾಲಕ ಶರವಣ ಮೊದಲಾದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.