ಮಹಾರಾಷ್ಟ್ರದ ಆರು ಖ್ಯಾತ ಕಲಾವಿದರ ಚಿತ್ರಕಲಾಕೃತಿಗಳು ರಸ ಗ್ಯಾಲರಿಯಲ್ಲಿ ಶುಕ್ರವಾರದ ವರೆಗೆ ಪ್ರದರ್ಶನಗೊಳ್ಳಲಿವೆ.
ಯುವ ಕಲಾವಿದರಾದ ಮನಿಶಾ ಚೌಧರಿ, ಅಭಿಜಿತ್ ರಮೇಶ್ ತಿಕೋನೆ, ಮೀನಾ ಜೋಷಿ, ಸ್ನೇಹಲ್ ಕದಂ, ಸಮೀರ್ ದೀಕ್ಷಿತ್, ಎನ್.ದೀಪಶ್ರೀ ಅವರ ಅಪರೂಪದ ಕಲಾಕೃತಿಗಳು ಮನಸೆಳೆಯುತ್ತವೆ.
ಪ್ರಕೃತಿಯ ಚೆಲುವು, ಹೆಣ್ಣು-ಗಂಡಿನ ಅಂತರಂಗದ ಮನೋತುಮುಲಗಳು, ಶೃಂಗಾರ ಭಾವ, ದೇವ-ದೇವತೆಗಳ ಚಿತ್ರಣ ಈ ಕಲಾವಿದರ ಕೈಚಳಕದಲ್ಲಿ ನವಿರಾಗಿ ಹೊಮ್ಮಿವೆ. ನೋಡಿದಾಕ್ಷಣ ಮನಸ್ಸಿಗೆ ಮುದ ನೀಡುವ ಇವರ ಕಲಾಕೃತಿಗಳು ಕಲಾಪ್ರೇಮಿಗಳಿಗೆ ಇಷ್ಟವಾದರೆ ಕೊಂಡುಕೊಳ್ಳಲು ಕೂಡ ಅವಕಾಶವಿದೆ.
ಸ್ಥಳ: ರಸ ಗ್ಯಾಲರಿ, ನಂ. 93, ಮುನಿನಾಗಪ್ಪ ಆರ್ಕೆಡ್, 3ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಚಾಮರಾಜಪೇಟೆ. ಬೆಳಿಗ್ಗೆ 11ರಿಂದ ಸಂಜೆ 7.30. ಮಾಹಿತಿಗೆ: 98447 11119.