ಬೆಂಗಳೂರು: ಬೃಹತ್ ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಿದ್ದರೆ ಏನೇನು ಅನಾಹುತ ಆಗಲಿದೆ ಎಂಬುದಕ್ಕೆ ಈ ಹದಗೆಟ್ಟ ರಸ್ತೆಗಳೇ ಸಾಕ್ಷಿ. ಒಂದೆಡೆ ಕೊಳಚೆ ಪ್ರದೇಶಗಳಿಗೆ ನುಗ್ಗಿ ಅಲ್ಲಿನ ಬಡವರ ಬದುಕನ್ನು ನಾಶಗೊಳಿಸುವ ಮಳೆರಾಯ, ವರ್ಷಕ್ಕೊಮ್ಮೆ ರಿಪೇರಿ ಮತ್ತು ಗುಂಡಿಮುಚ್ಚುವ ಶಾಸ್ತ್ರ ಮಾಡುವ ಬಿಬಿಎಂಪಿಯ ಈ ರಸ್ತೆಗಳನ್ನೂ ಹದಗೆಡಿಸಿಬಿಡುತ್ತಾನೆ.
ಕಡತಗಳು ಹಲವಾರು ಹಂತಗಳನ್ನು ದಾಟಿ ರಿಪೇರಿಗೆ ಆದೇಶ ಬರುವಷ್ಟರಲ್ಲಿ ನಗರದಲ್ಲಿ ಸುರಿಯುವ ಧಾರಾಕಾರ ಮಳೆ ಆ ರಸ್ತೆಗಳನ್ನು ಮತ್ತೆ ಹಾಳುಗೆಡವುತ್ತದೆ. ಬೆಂಗಳೂರು ನಗರಿಯ ರಸ್ತೆಗಳ ಅವ್ಯವಸ್ಥೆ ಮತ್ತು ವಾಹನ ಸವಾರರಿಗೆ ಅನುಭವಿಸಬೇಕಾದ ಸಂಕಷ್ಟಗಳನ್ನು ಛಾಯಾಚಿತ್ರಗಳೇ ವಿವರಿಸುತ್ತವೆ.