ನಾಟಕ ರತ್ನ ಗುಬ್ಬಿ ವೀರಣ್ಣ ಹುಟ್ಟೂರು ಇದಾಗಿದ್ದು, ಅವರು ಬೆಳೆದ ಮನೆ, ಅವರೇ ಕಟ್ಟಿದ ಶಾಲೆ ಇದ್ದರೂ ಊರಿಗೆ ರಸ್ತೆ ಇಲ್ಲವಾಗಿದೆ. ಅತಿಕ್ರಮಣಗೊಂಡಿರುವ ರಸ್ತೆಯನ್ನು ತಹಶೀಲ್ದಾರ್ ಕೂಡಲೇ ತೆರವುಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ನಾಳೆಯೇ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆದರು.
ಪ್ರತಿಭಟನೆ ನೇತೃತ್ವವನ್ನು ಗ್ರಾಮದ ಮುಖಂಡರಾದ ಜಿ.ಸಿ.ಸುರೇಶ್, ಶಿವಗಂಗಮ್ಮ, ಸಮುದ್ರನಹಳ್ಳಿ ಸಿ.ಬಿ.ರಂಗಯ್ಯ, ಪ್ರಭಣ್ಣ, ಮಹಾಲಿಂಗಯ್ಯ, ಮಂಜುನಾಥ್, ರವಿ, ಕುಮಾರ್, ರಂಗಯ್ಯ, ಬಸವರಾಜು, ಹೋಟೆಲ್ ಚೆನ್ನಬಸವಣ್ಣ ಇತರರು ವಹಿಸಿದ್ದರು.