ಕೊಚ್ಚೆಯಲ್ಲೇ ಉರುಳಾಡುವ, ಬಿಕರಿಯಾಗುವ ತರಕಾರಿ ಮೂಟೆಗಳು, ಕಾರ್ಯನಿರ್ವಹಿಸುವ ಕಾಯಿ ಮಂಡಿಗಳು ನೋಡಿದರೆ ವಾಕರಿಕೆ ಬರಿಸುತ್ತವೆ. ಅದನ್ನು ಕಂಡರೆ ಮತ್ತೆ ತರಕಾರಿ ತಿನ್ನಲೇಬಾರದು ಎಂದುಕೊಳ್ಳುವಷ್ಟು ಅಸಹ್ಯ ಹುಟ್ಟುತ್ತದೆ. ಎತ್ತ ಮುಖ ತಿರುವಿದರೂ ಅದೇ ದೃಶ್ಯ. ಮತ್ತೊಂದೆಡೆ, ರಸ್ತೆಯಲ್ಲೇ ಅನಧಿಕೃತ ಮಾರುಕಟ್ಟೆ ತೆರೆದುಕೊಳ್ಳುವ ಕಾರಣ ಟ್ರಾಫಿಕ್ ಜಾಮ್ ಆಗುತ್ತದೆ. ಇದಕ್ಕೊಂದು ಪರಿಹಾರವಿಲ್ಲವೇ?
- ಡಾ. ವಸುಮತಿ, ದೊಡ್ಡಕಲ್ಲಸಂದ್ರ.