ಐಎಎಸ್, ಐಪಿಎಸ್ಗಳಿರಲಿ ಎರಡನೆ ದರ್ಜೆ ಗುಮಾಸ್ತನಿಗೂ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಿರುತ್ತದೆ; ಇಲಾಖೆ ಪರೀಕ್ಷೆ ಬರೆದು ಬಡ್ತಿ ಪಡೆಯುತ್ತಾರೆ; ಪರಿಣತಿ ಬೇಡ, ಅಕ್ಷರಜ್ಞಾವೂ ಇರಲಾರದವರು ಇದ್ದಕ್ಕಿದಂತೆ ಇವರೆಲ್ಲರ `ಬಾಸ್~ ಆಗಿಬಿಡುವುದು ಹಾಸ್ಯಾಸ್ಪದವಲ್ಲವೇ?
ಚುನಾಯಿತ ಸದಸ್ಯರು ಆಡಳಿತದ ಮುಖ್ಯಸ್ಥರಾಗಬೇಕು, ನಿಜ. ಆದರೆ ನೌಕರಶಾಹೀ ಅರ್ಥದಲ್ಲಲ್ಲ, ನೈತಿಕ ಅರ್ಥದಲ್ಲಿ.
ಈಗಂತು ಇವರದು ದೋಚುವ-ಬಾಚುವ ದರ್ಬಾರು! `ನಾಳೆ ಯಾರೋ, ನಾವ್ಯಾರೋ ಸಿಕ್ಕಾಗ, ಸಿಕ್ಕಷ್ಟೂ ಹೊಡೆದು ಜಾಗ ಖಾಲಿ ಮಾಡು~ ಎಂಬುದೇ ಧ್ಯೇಯವಾಕ್ಯ! ಇದೇ ದುರಂತ.