ಬ್ಯಾಂಕಾಕ್ (ಐಎಎನ್ಎಸ್): ದೇಶ-ದಲ್ಲಿ ನಡೆಯುತ್ತಿರುವ ರಾಜಕೀಯ ವಿವಾದಕ್ಕೆ ಅಂತ್ಯ ಹಾಡುವ ಸಲುವಾಗಿ ಸಂಸತ್ ವಿಸ್ತರ್ಜಿಸಲು ಸಿದ್ಧನಿದ್ದೇನೆ ಎಂದು ಥಾಯ್ಲೆಂಡ್ ಪ್ರಧಾನಿ ಯಿಂಗ್ಲುಕ್ ಶಿನವತ್ರಾ ಭಾನುವಾರ ಹೇಳಿದ್ದಾರೆ.
ಆದರೆ, ಸಂಸತ್ ವಿಸರ್ಜನೆ ಮಾಡಿದ 60 ದಿನದೊಳಗೆ ಚುನಾವಣೆಯನ್ನು ಸಂಘಟಿಸಬೇಕು ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ ಪ್ರತಿಭಟನಾಕಾರರ ನಾಯಕ ಸುಥೆಪ್ ತಾವುಗ್ಸುಬಾನ್ ಅವರು ಸರ್ಕಾರ ವಿಸರ್ಜನೆ ನಿಟ್ಟಿನಲ್ಲಿ ಸೋಮವಾರ ಕೊನೆಯ, ಬೃಹತ್ ರ್್ಯಾಲಿ ಆಯೋಜಿಸಲಾಗಿದ್ದು, ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.