ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಜೀನಾಮೆಯಿಂದ ಸಮಸ್ಯೆ ನೀಗದು'

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಪಿಎಲ್‌ನಲ್ಲಿ ನಡೆದಿರುವ ಎಲ್ಲ `ಗೊಂದಲ'ಗಳಿಗೆ ರಾಜೀವ್ ಶುಕ್ಲಾ ಕಾರಣ ಎಂದು ಲೀಗ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಆರೋಪಿಸಿದ್ದು, ಅವರ ರಾಜೀನಾಮೆಯಿಂದ ಸಮಸ್ಯೆಗಳು ನೀಗದು ಎಂದಿದ್ದಾರೆ.

ಶುಕ್ಲಾ ಐಪಿಎಲ್ ಮುಖ್ಯಸ್ಥನ ಹುದ್ದೆಗೆ ಅಯೋಗ್ಯ ಎಂಬುದನ್ನು ಮ್ಯಾಚ್‌ಫಿಕ್ಸಿಂಗ್ ಪ್ರಕರಣ ತೋರಿಸಿಕೊಟ್ಟಿದೆ ಎಂದು ಅವರು `ಟ್ವಿಟರ್'ನಲ್ಲಿ ಬರೆದಿದ್ದಾರೆ.
`ರಾಜೀವ್ ಶುಕ್ಲಾ... ರಾಜೀನಾಮೆ ನೀಡುವ ಮೂಲಕ ಎಲ್ಲ ರೀತಿಯ ಆರೋಪಗಳಿಂದ ಹೊರಬರಬಹುದು ಎಂದು ಭಾವಿಸಬೇಡಿ.

ನಿಮ್ಮ ಅಧಿಕಾರದ ಅವಧಿಯಲ್ಲಿ ಈ ವಿವಾದಗಳು ನಡೆದಿವೆ. ಒಂದೋ ನೀವು ಈ ಹುದ್ದೆಗೆ ಅಯೋಗ್ಯ ಅಥವಾ ಈಗ ನಡೆದಿರುವ ಹಗರಣದಲ್ಲಿ ಭಾಗಿಯಾಗಿದ್ದೀರಿ' ಎಂದು ಮೋದಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT