ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಹಂತಕಿ ಧನುವಿಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ !

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ `ಆತ್ಮಹತ್ಯಾ ಬಾಂಬರ್~ ಧನುವಿಗೆ ತನಿಖಾ ಸಂಸ್ಥೆಯ ಯಶಸ್ವಿ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿರುವುದಾಗಿ ಸಿಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಮಹಾನ್ ಪ್ರಮಾದ ಎಸಗಿರುವುದು ಬೆಳಕಿಗೆ ಬಂದಿದೆ.

1991ರ ಮೇ 21ರಂದು ಶ್ರೀಪೆರಂಬುದೂರ್‌ನಲ್ಲಿ ಈ ಕಾಂಗ್ರೆಸ್ ನಾಯಕನನ್ನು ಹತ್ಯೆ ಮಾಡಿದ ಕ್ಷಣವೇ, ಎಲ್‌ಟಿಟಿಯಿಂದ ನಿಯೋಜನೆಗೊಂಡಿದ್ದ ಹಂತಕಿ ಧನು ಅಲಿಯಾಸ್ ತೆನ್ಮೋಜಿ ರಾಜರತ್ನಂ, ತನ್ನನ್ನು ಸ್ಫೋಟಿಸಿಕೊಂಡು ಸತ್ತು 20 ವರ್ಷಗಳು ಕಳೆದಿದ್ದರೂ, ಸಿಬಿಐ ತನ್ನ ವೆಬ್‌ಸೈಟ್‌ನಲ್ಲಿ ಈ ತಪ್ಪು ಮಾಹಿತಿ ಪ್ರಕಟಿಸಿದೆ.

ಇದರೊಂದಿಗೆ ಈ ವೆಬ್‌ಸೈಟ್‌ನ ಮುಖಪುಟದಲ್ಲಿ ರಾಜೀವ್ ಹತ್ಯೆ ವಿಷಯ ಮಾತ್ರ ಪ್ರಮುಖವಾಗಿ ಕಾಣಿಸಿದ್ದು, ಇದು ಸಿಬಿಐ ಪ್ರಮಾದವನ್ನು ಇನ್ನಷ್ಟು ಬಯಲುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT