ರಾಜ್ಯದ ಹಿತಕ್ಕಿಂತ ಪ್ರಜಾಪ್ರಭುತ್ವ ಮುಖ್ಯವಾದುದು ಎಂದು ಇನ್ಫೋಸಿಸ್ನ ಸ್ಥಾಪಕರಾದ ನಾರಾಯಣಮೂರ್ತಿರವರು ಫರ್ಮಾನು ಹೊರಡಿಸಿದ್ದಾರೆ. ಅದಾದರೂ ಹೆಗ್ಗೋಡಿನ ನೀನಾಸಂನಲ್ಲಿ ನಡೆದ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಈ ಮುತ್ತಿನ ನುಡಿ ಹೊರಬಿದ್ದಿರುವುದು ಗಮನಿಸಬೇಕಾದುದು. ಕರ್ನಾಟಕದ ಎಲ್ಲಾ ಮೂಲಭೂತ ಸೌಲಭ್ಯಗಳು, ಸರ್ಕಾರಿ ತೆರಿಗೆ ವಿನಾಯಿತಿ ಎಲ್ಲವೂ ಬೇಕು.
ಸರ್ಕಾರದಿಂದ ಕಡಿಮೆ ದರದಲ್ಲಿ ಜಮೀನು, ನೀರು, ವಿದ್ಯುತ್ ಮುಂತಾದ ಸವಲತ್ತುಗಳನ್ನೆಲ್ಲಾ ಪಡೆದ ಇವರಿಗೆ ಉದ್ಯೋಗದ ಸಂದರ್ಭದಲ್ಲಿ ಮಾತ್ರ ಈ ನೆಲದ ಅಸಂಖ್ಯಾತ ನಿರುದ್ಯೋಗಿಗಳು ಕೆಲಸಕ್ಕೆ ಬಾರದವರಾಗುತ್ತಾರೆ.