ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ವಿ.ಎಸ್.ಮೋಖಾಲೆ, ಗುಜರಾತನ ಭಿಕ್ಕುಸಿಂಗ್ ಗೆಹ್ಲೋಟ್, ಫಾದರ ಬೆಂಜಮಿನ್ ಡಿಸೋಜಾ, ಬಸವಣ್ಣೆಪ್ಪ ತಿಬಶೆಟ್ಟಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವ ಕಾಳೇಕರ್, ಪ್ರಮುಖರಾದ ಎಚ್.ಶ್ರೇಯಸ್ಕರ್, ಬಾಬುರಾವ ಮದಲವಾಡಾ, ವಿಭೂತಿ ಬಸವಾನಂದ, ಸೂರ್ಯಕಾಂತ ಗಾಯಕವಾಡ, ಸಂಜೀವ ಮೋರಖಂಡಿ, ಕೆ.ಬಿ.ಹೊಸಮನಿ, ಭಗವಾನ ಕಾಂಬಳೆ, ಸಂಜೀವ ಗೋಡಬೋಲೆ, ಮುರಲಿ ದಾದೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಿತು.